
ರಕ್ಷಣೆ ಇಲ್ಲದ ರಾಜ್ಯದ ಮೇಲೆ ಎಂತೆಂತಹ ದಾಳಿಗಳನ್ನು ಮಾಡಬಹುದು ಎಂಬುದಕ್ಕೆ ಕರ್ನಾಟಕ ಉದಾಹರಣೆಯಾಗಬೇಕೇ? ಕರ್ನಾಟಕದ ಮೇಲೆ ನೆರೆ ರಾಜ್ಯಗಳ ಸವಾರಿ ಇಂದು ಹೊಸತೇನು ಅಲ್ಲ. ಇದು ಪಾರಂಪರಿಕವಾಗಿ ನಡೆದುಕೊಂಡು ಬಂದಿರುವುದು ನಮ್ಮ ಇತಿಹಾಸದಿಂದ ವೇದ್ಯವಾಗುತ್ತದೆ. ಇಂತಹ ಸನ್ನಿವೇಶ ಪ್ರಾಚೀನ ಕಾಲದಿಂದ ಅಸ್ಥಿತ್ವದಲ್ಲಿದ್ದರೂ ಸಹ ಇದಾವುದನ್ನು ಲೆಕ್ಕಿಸದೆ ಸ್ವಾರ್ಥ ವನ್ನೇ ಪ್ರಧಾನವಾಗಿರಿಸಿಕೊಂಡು ಒಂದು ಆಡಳಿತಾತ್ಮಕ ವ್ಯವಸ್ಥೆಯನ್ನು ಗಾಳಿಗೆ ತೂರಿದ ನಮ್ಮ ರಾಜಕಾರಣಿಗಳಿಗೆ ಕ್ಷಮೆ ಇದೆಯೇ?
2004ರ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಗೆ ಯಾವುದೇ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಆ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಸಮ್ಮಿಶ್ರ ಸರ್ಕಾರ, ಮೊದಲು ಕಾಂಗ್ರೇಸ್ನೊಂದಿಗೆ ಆನಂತರ ಬಿ.ಜೆ.ಪಿ ಯೊಂದಿಗೆ ಸರ್ಕಾರ ರಚನೆ ಮಾಡಿ ಸರಿ ಸುಮಾರು 20-20 ತಿಂಗಳುಗಳ ಕಾಲ ಆಡಳಿತ ನಡೆಸಿದ ಜಾತ್ಯಾತೀತ ಜನತಾದಳ ಸ್ವಾರ್ಥವನ್ನು ಮೈಗೂಡಿಸಿಕೊಂಡು ಎರಡೂ ಪಕ್ಷಗಳೊಂದಿಗೆ ಸಂಬಂಧ ಕಡಿದು ಸರ್ಕಾರಗಳನ್ನು ಉರುಳಿಸಿದ ಕಥೆ ಜನ ಸಾಮಾನ್ಯರೆಲ್ಲರಿಗೂ ಗೊತ್ತು.
ಹೀಗೆ 2004ರ ನಂತರ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಕೈ ಜೋಡಿಸಿದ ಯಾವುದೇ ಪಕ್ಷದವರೂ ನಾಡು ನುಡಿ ಹಾಗೂ ಇಲ್ಲಿನ ಜನರ ಕುರಿತಾಗಿ ಕಿಂಚಿತ್ತಾದರೂ ಆಲೋಚಿಸಿದ್ದರೇ ಎಂಬುದು ಪ್ರಶ್ನಾರ್ಹ. ಒಂದು ಸರ್ಕಾರದ ಅಸ್ಥಿತ್ವವಾಗಲಿ ಅಥವಾ ಅವನತಿಯಾಗಲಿ ಒಂದು ರಾಜ್ಯದ ಮೇಲೆ ಸೂಕ್ಷ್ಮವಾಗಿ ಹಾಗೂ ಸಮಗ್ರವಾಗಿ ಎಂಥೆಂತಹ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಯೋಚಿಸದೇ ನಿರ್ಧಾರ ಕೈಗೊಳ್ಳುವ ಮುಖಂಡರು ನಮ್ಮ ಮೇಲೆ ಹತ್ತಾರು ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ ಹಾಗೂ ಅವರನ್ನೇ ನಾವು ಪುನ: ಪುನ: ಆಯ್ಕೆ ಮಾಡುತ್ತಿದ್ದೇವೆ ಎಂಬುದು ಮತದಾರರು ತಲೆ ತಗ್ಗಿಸುವಂತಹ ವಿಷಯವಾಗಿದೆ.
ಪ್ರಸ್ತುತ ಕರ್ನಾಟಕದ ವಿಚಾರವನ್ನು ಗಮನಿಸುವುದಾದರೆ ಒಂದೆಡೆ ತಮಿಳುನಾಡಿನ ಕಿರುಕುಳ, ಮತ್ತೊಂದೆಡೆ ಎಂದಿಗೂ ಯಾವುದಕ್ಕೂ ಈ ಪರಿಯಲ್ಲಿ ತಂಟೆ ಮಾಡದ ಕೇರಳ ಇಂದು ಅಪಸ್ವರ ಎಳೆದು ಕುಳಿತಿದೆ. ಇನ್ನು ಮಹಾರಾಷ್ಟ್ರದ ರಗಳೆ ಹಿಂದಿನಿಂದಲೂ ಇದ್ದದ್ದೇ, ಆಂಧ್ರದ ಹಿಂಸೆ ಸದ್ಯಕ್ಕೆ ಇಲ್ಲವಾದರೂ ಅದರ ರಗಳೆಯನ್ನು ತಳ್ಳಿ ಹಾಕುವಂತಿಲ್ಲ. ಹೊಗೇನಕಲ್ ದ್ವೀಪದಲ್ಲಿ ನಡೆಯುತ್ತಿರುವ ಕಾಮಗಾರಿ ಅಧಿಕೃತವೋ, ಅನಧೀಕೃತವೋ ಎಂಬ ವಿಚಾರ ಇನ್ನು ಮುಂದೆ ನಿರ್ಧಾರವಾಗಬೇಕಾಗಿದೆ. ಆದರೆ ಒಂದು ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಇಲ್ಲದ ಸಂಧರ್ಭದಲ್ಲಿ ಅವರು ಅದನ್ನು ಕೈಗೆತ್ತಿಕೊಂಡಿದ್ದು, ಅವರ ಸಮಯಸಾಧಕತನ ಹಾಗೂ ನಮ್ಮ ಜನಪ್ರತಿನಿಧಿಗಳ ಮೂರ್ಖತನ ಎಂಬುದರಲ್ಲಿ ಎರಡನೇ ಮಾತಿಲ್ಲ. ತಮಿಳುನಾಡು ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲೆ ಆಗ್ಗಾಗ್ಗೆ ಸವಾರಿ ಮಾಡುತ್ತಲೇ ಬಂದಿದ್ದು ಅದನ್ನು ಸಮರ್ಥವಾಗಿ ಎದುರಿಸಲಾಗದ ನಮ್ಮ ಮುಂಖಂಡರೆನಿಸಿಕೊಂಡವರು ತಮಿಳುನಾಡು ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ಆಗ್ಗಾಗ್ಗೆ ಪ್ರಸ್ಥಾಪಿಸುತ್ತಿದ್ದು ಸದಾ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಈ ಸಂಗತಿಯೂ ಸಹ ನಮ್ಮ ಮುರ್ಖ ರಾಜಕಾರಣಿಗಳ ಹೊಣೆಗೇಡಿ ಹೇಳಿಕೆಗಳು, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸ್ವಾಭಿಮಾನ ಸಂಬಂಧಿ ವಿಚಾರಗಳಿಗೆ ನೇರವಾಗಿ ಸಂಬಂಧಿಸಿದುದು ಎಂಬ ಅರಿವಿದ್ದಿದ್ದರೆ ಈ ಹೇಳಿಕೆಗಳನ್ನು ಯಾವುದೇ ಜವಾಬ್ದಾರಿಯುತವಾದ ವ್ಯಕ್ತಿ ನೀಡುತ್ತಿರಲಿಲ್ಲ.
ಅನೇಕ ಸಮಸ್ಯೆಗಳಿದ್ದರೂ ಸಹ ಇದುವರೆಗೆ ಸೌಹಾರ್ಧಯುತವಾಗಿ ನಡೆದುಕೊಂಡು ಬಂದಿದ್ದ ಕೇರಳ ದಕ್ಷಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ಗಡಿ ಭಾಗದ ನೂರಾರು ಎಕರೆ ಜಾಗ ತನಗೆ ಸೇರಬೇಕು ಎಂದು ಅಲ್ಲಿ ವನಸಂವರ್ಧನೆಗೆ ಮುಂದಾಗಿರುವುದು ದುರಂತದ ಸಂಗತಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯವೂ ಸಹ ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ಥಿತ್ವದಲ್ಲಿ ಇಲ್ಲದೇ ಇರದ ಕಾಲದಲ್ಲಿ ಮುಂದಾಗಿರುವುದು ಪರಸ್ಪರ ರಾಜ್ಯಗಳ ದೌರ್ಭಲ್ಯವೇ ಆಗಿದೆ.
ಮಹಾರಾಷ್ಟ್ರ ರಾಜ್ಯವಂತೂ ಅಲ್ಲಿಯ ರಾಜ್ಯ ಸರ್ಕಾರವೂ ಸೇರಿದಂತೆ ವಿವಿಧ ಸಂಘಟನೆಗಳು ಎಗ್ಗು ಸಿಗ್ಗಿಲ್ಲದೆ ಕರ್ನಾಟಕದ ಮೇಲೆ ವಿಪರೀತ ಹೇಳಿಕೆಗಳನ್ನು ನೀಡುತ್ತಾ ಗಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಿರುವುದು ಅವಕಾಶವಾದವಲ್ಲದೆ ಮತ್ತೇನೂ ಅಲ್ಲ. ಸದ್ಯದ ಸ್ಥಿತಿಯಲ್ಲಿ ಆಂಧ್ರ ಯಾವುದೇ ಸಮಸ್ಯೆಗಳನ್ನು ಉಂಟು ಮಾಡದೇ ಇದ್ದಾಗ್ಯೂ ಕರ್ನಾಟಕದಲ್ಲಿ ಒಂದು ಜನಪ್ರಿಯ ಸರ್ಕಾರ ಹಾಗೂ ದಕ್ಷ ಆಡಳಿತ ಅಸ್ಥಿತ್ವದಲ್ಲಿ ಇದ್ದ ಸಂದರ್ಭದಲ್ಲಿಯೇ ನಮ್ಮ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಗೊತ್ತಿಲ್ಲದಂತೆ ರಾಜ್ಯದ ಒಳಗೂ ಕಾಮಗಾರಿ ಮಾಡಿದ ಅವಿವೇಕಿಗಳು. ಈ ಕಾರಣದಿಂದ ಅವರನ್ನು ನಾವು ಯಾವಾಗಲೂ ಕಡೆಗಣಿಸಲಾಗದು.
ಒಂದು ರಾಜ್ಯದಲ್ಲಿ ದಕ್ಷ ಆಡಳಿತ ಹಾಗೂ ಸರ್ಕಾರ ಇಲ್ಲದಾಗ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎಂಬ ಪಾಠವನ್ನು ಈ ಸಂಧರ್ಭದಲ್ಲಿ ಕಲಿಯುವ ಅವಕಾಶವನ್ನೂ ಈ ಹಿಂದೆ ೨೦-೨೦ ತಿಂಗಳು ನಮ್ಮನ್ನು ಆಳಿದ ಸಮ್ಮಿಶ್ರ ಸರ್ಕಾರಗಳು ಕಲಿಸಿ ಹೋಗಿವಿ ಹಾಗೂ ರಾಜಕಾರಣಿಗಳನ್ನು ಸಹ ಸ್ವಯಂ ಬೋಧನೆಗೆ ಒಳಗಾಗಿರಬಹುದು, ಇಂತಹಜ ಸ್ಥಿತಿ ಮುಂದೆ ಕನ್ನಡಿಗರಿಗೆ ಬಾರದಂತೆ ತಡೆಯುವ ಶಕ್ತಿ ಇರುವುದು ಕನ್ನಡಿಗರಿಗೆ ಮಾತ್ರ.
No comments:
Post a Comment